ವಿಮಾನಗಳ ಹಾರಾಟಕಕ್ಕೂ ಅಡ್ಡಿ!

geetha

ಭಾನುವಾರ, 14 ಜನವರಿ 2024 (17:30 IST)
ನವದೆಹಲಿ : ಚಳಿಗಾಲದ ಮಧ್ಯಭಾಗದಲ್ಲಿ ದೇಶಾದ್ಯಂತ ವಿವಿಧ ನಗರಗಳಲ್ಲಿ ಇಂದು ದಟ್ಟವಾದ ಮಂಜು ಆವರಿಸಿದೆ. ದೆಹಲಿ, ಕಾಶ್ಮೀರ ಹಾಗೂ ತಮಿಳುನಾಡಿನಲ್ಲಿಯೂ ಸಹ ದಟ್ಟವಾದ ಮಂಜು ವಿಮಾನಗಳು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯನ್ನುಂಟುಮಾಡಿದೆ. 
 
ದೆಹಲಿಯಲ್ಲಿ ದಟ್ಟವಾದ ಮಂಜಿನ ದೆಸೆಯಿಂದಾಗಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಿದೆ.  ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಬೆಳಗಿನ ಸಮಯ 9 ಗಂಟೆಯವರೆಗೂ ಮಂಜು ಮುಸುಕಿದ್ದ ಕಾರಣ ರಸ್ತೆ ಕಾಣದಂತಾಗಿ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳನ್ನು ನಿಲ್ಲಿಸಲಾಗಿತ್ತು. ಇನ್ನು ಜಮ್ಮು- ಕಾಶ್ಮೀರದಲ್ಲಿ ಮಂಜು ಹೆಚ್ಚಾಗಿರುವುದು ಪ್ರವಾಸಿಗರ ಭೇಟಿಗೆ ಉತ್ತಮ ಅವಕಾಶವನ್ನು ಕಲ್ಪಿಸಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ