ಮಧು ಬಂಗಾರಪ್ಪರನ್ನ ಭೇಟಿಯಾದ ಡಿಕೆಶಿ

ಸೋಮವಾರ, 13 ಮಾರ್ಚ್ 2017 (18:52 IST)
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಬಂಗಾರಪ್ಪನವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ದು, ಇತ್ತ ಕಿರಿಯ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್`ನತ್ತ ಚಿತ್ತ ನೆಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸ್ವತಃ ಸಚಿವ ಡಿ.ಕೆ. ಶಿವಕುಮಾರ್, ಮಧು ಬಂಗಾರಪ್ಪ ಮನೆಗೆ ತೆರಳಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಕಾಗೋಡು ತಿಮ್ಮಪ್ಪ ಸಹ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.

ಬಂಗಾರಪ್ಪನವರು ನನ್ನನ್ನ ಮಂತ್ರಿ ಮಾಡಿದ್ದರು. ಅವರ ಋಣ ತೀರಿಸುವುದಾಗಿ ಶಕುಂತಲಾ ಬಂಗಾರಪ್ಪಗೆ ಡಿಕೆಶಿ ಮಾತು ಕೊಟ್ಟಿದ್ದರಂತೆ. ಅದರಂತೆ, ಮತ್ತೆ ಪಕ್ಷಕ್ಕೆ ಕರೆತರಲು ಡಿಕೆಶಿ ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ