ಅಣ್ಣಾಮಲೈ ಸೋಲನ್ನು ಬಿರಿಯಾನಿ ಹಂಚಿ ಸಂಭ್ರಮಿಸಿದ ಡಿಎಂಕೆ ನಾಯಕರು

sampriya

ಮಂಗಳವಾರ, 4 ಜೂನ್ 2024 (19:48 IST)
Photo By X
ಕೊಯಂಬತ್ತೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲ್ಲುವ ಕುದುರೆಯ ಪಟ್ಟಿಯಲ್ಲಿದ್ದ ಅಣ್ಣಾಮಲೈ ಅವರಿಗೆ ಅವರ ಹುಟ್ಟು ಹಬ್ಬದ ದಿನವೇ ಸೋಲಿನ ಕಹಿ ಅನುಭವಾಗಿದೆ.
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಕೊಯಂಬತ್ತೂರು ಲೋಕಸಭಾ ಕ್ಷೇತ್ರದಲ್ಲಿ ಸೋಲಾಗಿದೆ.

ಡಿಎಂಕೆ ಅಭ್ಯರ್ಥಿ ಪಿ. ಗಣಪತಿ ರಾಜ್​ಕುಮಾರ್​ ಎದುರು 73,696 ಮತಗಳ ಅಂತರದಲ್ಲಿ ಅಣ್ಣಾಮಲೈಗೆ ಸೋಲು ಖಚಿತವಾಗುತ್ತಿದ್ದ ಹಾಗೇ ಡಿಎಂಕೆ ನಾಯಕರು ಮಟನ್​ ಬಿರಿಯಾನಿ ಹಂಚಿ ಸಂಭ್ರಮಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ವಿಡಿಯೋದಲ್ಲಿ ಡಿಎಂಕೆ ಕಾರ್ಯಕರ್ತರು ಮೇಕೆಯ ಕೊರಳಲ್ಲಿ ಅಣ್ಣಾಮಲೈ ಫೋಟೋವನ್ನು ನೇತುಹಾಕಿ ಮೆರವಣಿಗೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಬಳಿಕ ಮಟನ್​ ಬಿರಿಯಾನಿ ಹಂಚಿ ಡಿಎಂಕೆ ನಾಯಕರು ಮಟನ್​ ಬಿರಿಯಾನಿ ಹಂಚಿ ಅಣ್ಣಾಮಲೈ ಸಿಂಘಂ ಅಲ್ಲಾ ಆಡು ಎಂದು ಲೇವಡಿ ಮಾಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ