ಪತ್ನಿ ಮನೆಗೆ ಬರಲು ನಿರಾಕರಿಸಿದ್ದಕ್ಕೆ ಬೇಸರಗೊಂಡ ಪತಿ ಮಾಡಿದ್ದೇನು ಗೊತ್ತಾ?

ಗುರುವಾರ, 31 ಅಕ್ಟೋಬರ್ 2019 (11:45 IST)
ಹೈದರಾಬಾದ್ : ಪತ್ನಿ ಮನೆಗೆ ಬರಲ್ಲ ಎಂದಿದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಅಚುತಪುರಂನಲ್ಲಿ ನಡೆದಿದೆ.



ವೀರ ಬಾಬು (22) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೀರ ಬಾಬು ನಾಲ್ಕು ತಿಂಗಳ ಹಿಂದೆ ಸತ್ಯವೇಣಿ ಎಂಬಾಕೆಯನ್ನು ವಿವಾಹವಾಗಿದ್ದರು. ಸತ್ಯವೇಣಿ ಪದೇ ಪದೇ ತವರು ಮನೆಗೆ ಹೋಗುತ್ತಿದ್ದ ಕಾರಣ ದೀಪಾವಳಿ ಹಬ್ಬಕ್ಕೆ ಆಕೆಯನ್ನು ಮನೆಗೆ  ಕರೆಯಲು ವೀರ ಬಾಬು ಹೆಂಡತಿ ಮನೆಗೆ ಹೋದಾಗ ಆಕೆ ಪತಿಯ ಜೊತೆ ಬರಲು ನಿರಾಕರಿಸಿದ್ದಾಳೆ. ಇದಕ್ಕೆ ಆಕೆಯ ಮನೆಯವರು ಸಹಕರಿಸಿದ್ದಾರೆ.


ಇದರಿಂದ ಬೇಸರಗೊಂಡ ವೀರಬಾಬು ಮನೆಗೆ ಬಂದು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೃತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ