ಸ್ನೇಹಿತನ ಮದುವೆಗೆ ಬಂದಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್‌ನಲ್ಲಿ ಮುಳುಗಿ ಸಾವು

Sampriya

ಸೋಮವಾರ, 6 ಮೇ 2024 (19:06 IST)
ಕನ್ಯಾಕುಮಾರಿ: ಇಲ್ಲಿನ  ಗಣಪತಿಪುರಂನ ಲೆಮೂರ್  ಸಮುದ್ರದಲ್ಲಿ ಈಜಾಡಲು ಹೋದ ಐವರು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ  ನಡೆದಿದೆ.

ಮೃತರು ತಮ್ಮ ಸ್ನೇಹಿತನ ಮದುವೆಗೆ ತಿರುಚಿರಾಪಳ್ಳಿಯಿಂದ ಬಂದಿದ್ದರು.

ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ. ಎಂಟು ಜನರ ಪೈಕಿ ಐವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.


ಮೃತರನ್ನು ಕನ್ಯಾಕುಮಾರಿ ಮೂಲದ ಸರ್ವದರ್ಶಿತ್ (23), ದಿಂಡಿಗಲ್ ಮೂಲದ ಪ್ರವೀಣ್ ಸ್ಯಾಮ್ (23), ನೇವೇಲಿ ಮೂಲದ ಗಾಯತ್ರಿ (25), ಆಂಧ್ರಪ್ರದೇಶದ ವೆಂಕಟೇಶ್ (24) ಮತ್ತು ತಂಜಾವೂರು ಮೂಲದ ಚಕ್ರವರ್ತಿ (23) ಎಂದು ಗುರುತಿಸಲಾಗಿದೆ.

ನಿನ್ನೆ ಇದೇ ಕಡಲತೀರದಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.  ಸಮುದ್ರದಲ್ಲಿ ಅಪಾಯದ ಮುನ್ಸೂಚನೆಯಿಂದ ಅಧಿಕಾರಿಗಳು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಕಳೆದ ಎರಡು ದಿನಗಳಲ್ಲಿ ಲೆಮೂರ್ ಕಡಲತೀರದಲ್ಲಿ ಒಟ್ಟು ಎಂಟು ಜನರು ನೀರಿನಲ್ಲಿ ಮುಳುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ