ತಾಜ್ ಮಹಲ್ ನಲ್ಲಿ ಕೇಸರಿ ಧ್ವಜ ಹಾರಿಸಿ ಶಿವ ಚಾಲೀಸ ಹೇಳಿದ ನಾಲ್ವರು ಅರೆಸ್ಟ್

ಮಂಗಳವಾರ, 5 ಜನವರಿ 2021 (11:07 IST)
ಆಗ್ರಾ: ಪ್ರೇಮಸೌಧ ತಾಜ್ ಮಹಲ್ ಮುಂದೆ ಭಾಗವಧ್ವಜ ಹಾರಿಸಿ ಶಿವ ಚಾಲೀಸ ಪಠಿಸಿದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.


ಹಿಂದೂ ಜಾಗರಣ ವೇದಿಕೆಯ ನಾಲ್ವರು ಕಾರ್ಯಕರ್ತರು ಬಂಧಿತರು. ತಾಜ್ ಮಹಲ್ ಪರಿಸರದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕೊರೋನಾ ಕಾರಣದಿಂದ ಒಳಗಡೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ತಾಜ್ ಮಹಲ್ ಒಳಗೆ ಹೋಗಲು ಈ ಯುವಕರಿಗೆ ಸಾಧ‍್ಯವಾಗಿಲ್ಲ. ಹಾಗಿದ್ದರೂ ಈ ನಿಷೇಧಿತ ಪರಿಸರದಲ್ಲಿ ಕೇಸರಿ ಧ್ವಜ ಹಾರಿಸಿದ ಕಾರಣಕ್ಕೆ ಯುವಕರನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ