ದಸರಾ ಅಂಗವಾಗಿ ಶೂರ್ಪಣಖಿ ಪ್ರತಿಕೃತಿ ದಹಿಸಿದ ನೊಂದ ಪತಿಯಂದಿರು!

ಶನಿವಾರ, 20 ಅಕ್ಟೋಬರ್ 2018 (09:20 IST)
ನವದೆಹಲಿ: ಸಾಮಾನ್ಯವಾಗಿ ದಸರಾಗೆ ರಾವಣನ ಪ್ರತಿಕೃತಿ ದಹಿಸುತ್ತಾರೆ. ಆದರೆ ಮಹಾರಾಷ್ಟ್ರದ ಔರಂಗಾದಾಬಾದ್ ನಲ್ಲಿ ನೊಂದ ಪತಿಯಂದಿರ ಗುಂಪು ಶೂರ್ಪಣಖಿ ಪ್ರತಿಕೃತಿ ದಹಿಸಿ ಪತ್ನಿಯರ ಮೇಲಿನ ಸಿಟ್ಟು ಹೊರಹಾಕಿದ್ದಾರೆ.

ಇಲ್ಲಿನ ಪತ್ನಿ ಪೀಡಿತ ಪುರುಷರ ಸಂಘಟನೆ ಎಂಬ ಸಂಘ ಈ ಕಾರ್ಯಕ್ರಮ ಮಾಡಿದೆ. ಪತ್ನಿಯರ ಕಾಟದಿಂದ ಬೇಸತ್ತು ಈ ಪುರುಷರು ತಮ್ಮ ಸಿಟ್ಟನ್ನು ಈ ರೀತಿ ಹೊರಹಾಕಿದ್ದಾರಂತೆ.

ಈ ಬಗ್ಗೆ ಮಾತನಾಡಿರುವ ಸಂಘಟನೆಯ ಸಂಸ್ಥಾಪಕ ಭರತ್ ಫುಲರೆ ‘ದೇಶದಲ್ಲಿ ಎಲ್ಲಾ ಕಾನೂನುಗಳು ಪತ್ನಿಯರ ಪರವಾಗಿಯೇ ಇದೆ. ಆದರೆ ಪತ್ನಿಯರು ಗಂಡಂದಿರು ಮತ್ತು ಅತ್ತೆ-ಮಾವಂದಿರ ಮೇಲೆ ಸಿಲ್ಲಿ ಪ್ರಕರಣಗಳನ್ನು ಹಾಕಿ ಪೀಡಿಸುತ್ತಾರೆ. ಇದನ್ನು ಖಂಡಿಸಿ ನಾವು ಇಂದು ಶೂರ್ಪಣಖಿಯ ಪ್ರತಿಕೃತಿ ದಹಿಸಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ