ನರಿ ಬುದ್ಧಿ ತೋರಿಸಿದ ಪಾಕ್ ಮೇಲೆ ಹುಲಿಯಂತೆ ಎರಗಿದ ಭಾರತೀಯ ಸೇನೆ ಮಾಡಿದ್ದೇನು ಗೊತ್ತಾ?!

ಮಂಗಳವಾರ, 16 ಜನವರಿ 2018 (09:06 IST)
ನವದೆಹಲಿ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ವಿನಾಕಾರಣ ಶೆಲ್ ದಾಳಿ ಮಾಡಿ ನರಿ ಬುದ್ಧಿ ತೋರಿಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ.
 

ನಿನ್ನೆ ಗಡಿನಿಯಂತ್ರಣ ರೇಖೆ ಬಳಿ ಮೆಂಥಾರ್ ಎಂಬಲ್ಲಿ ಪಾಕ್ ಸೈನಿಕರ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ ಒಬ್ಬ ಮೇಜರ್ ಜನರಲ್ ಸೇರಿದಂತೆ 7 ಪಾಕ್ ಯೋಧರನ್ನು ಹತ್ಯೆ ಮಾಡಿದೆ. ಅಲ್ಲದೆ ಒಂದು ಪಾಕ್ ಸೇನಾ ಶಿಬಿರವನ್ನೂ ಧ್ವಂಸಗೊಳಿಸಿದೆ.

ಶನಿವಾರ ಪಾಕ್ ಪಡೆಗಳು ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರಿಂದ ಓರ್ವ ಯೋಧ ಹುತಾತ್ಮನಾಗಿದ್ದ. ಪಾಕ್ ದಾಳಿಗೆ ಎಚ್ಚೆತ್ತ ಭಾರತೀಯ ಸೈನಿಕರು ಕೂಡಲೇ ಪ್ರತಿದಾಳಿ ನಡೆಸಿದ್ದರು. ಇದೀಗ ಭಾರತೀಯ ಸೇನೆ ಸರಿಯಾಗಿಯೇ ಸೇಡು ತೀರಿಸಿಕೊಂಡಿದೆ.

ಆದರೆ ಪಾಕ್ ಮಾತ್ರ ಎಂದಿನ ವರಸೆ ತೋರಿದ್ದು, ದಾಳಿಯಲ್ಲಿ ನಮ್ಮ ನಾಲ್ವರು ಯೋಧರು ಮಾತ್ರ ತೀರಿಕೊಂಡಿದ್ದಾರೆ. ಭಾರತೀಯ ಸೈನಿಕರನ್ನೂ ನಾವು ಹೊಡೆದುರುಳಿಸಿದ್ದೇವೆ ಎನ್ನುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ