ನನ್ನ ತಂದೆ ಸಾವಿಗೆ ಪ್ರತೀಕಾರವಾಗಿ 50 ಪಾಕಿಸ್ತಾನ ಸೈನಿಕರ ತಲೆ ತಂದು ಕೊಡಿ: ಸೇನೆಗೆ ಹುತಾತ್ಮ ಯೋಧನ ಪುತ್ರಿ ಆಗ್ರಹ

ಮಂಗಳವಾರ, 2 ಮೇ 2017 (16:22 IST)
ಪಾಕಿಸ್ತಾನ ಸೇನೆ ಭಾರತೀಯ ಯೋಧರ ಶಿರಚ್ಛೇದನಾ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೂರಿ ಪಾಕಿಸ್ತಾನಿಗಳಿಗೆ ತಕ್ಕ ಉತ್ತರ ನೀಡುವಂತೆ ಹುತಾತ್ಮರ ಯೋಧರ ಕುಟುಂಬಗಳು ಭಾರತ ಸರ್ಕಾರವನ್ನ ಒತ್ತಾಯಿಸಿವೆ.
 

ಹುತಾತ್ಮ ಬಿಎಸ್ಎಫ್ ಹೆಡ್ ಕಾನ್ಸ್`ಟೇಬಲ್ ಪ್ರೇಮ್ ಸಾಗರ್ ಪುತ್ರಿ ಸರೋಜ್, ನಮ್ಮ ತಂದೆಯ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆಯ 50 ಯೋಧರು ತಲೆಗಳನ್ನ ನಮಗೆ ತಂದು ಕೊಡಿ ಎಂದು ಒತ್ತಾಯಿಸಿದ್ದಾರೆ. ಹುತಾತ್ಮ ಯೋಧ ಪ್ರೇಮ್ ಸಾಗರ್, ಡಿಯೋರಿಯಾ ಜಿಲ್ಲೆಯ ತಕೇನ್ ಪುರ್ ಮೂಲದವರು.

ನಿನ್ನೆ ಯುದ್ಧ ವಿರಾಮ ಉಲ್ಲಂಘಿಸಿ ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನ ಸೇನೆ, ಪೂಂಚ್ ಬಳಿಯ ಕೃಷ್ಣ ಘಾಟಿ ಬಳಿಯ ಭಾರತೀಯ ಸೇನಾ ನೆಲೆ ಮೇಲೆ ರಾಕೆಟ್  ಮತ್ತು ಆಟೋಮೆಟಿಕ್ ಬಂಧೂಕುಗಳ ಮೂಲಕ ಗುಂಡಿನ ದಾಳಿ ನಡೆಸಿತ್ತು. ಭಾರತದ ಇಬ್ಬರು ಯೋಧರನ್ನ ಕೊಂದು ತಲೆ ಕತ್ತರಿಸಿತ್ತು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ