ರಾಮಮಂದಿರ ಕೆಡವಿದವರು ಭಾರತೀಯ ಮುಸ್ಲಿಮರಲ್ಲ! ಆರ್ ಎಸ್ಎಸ್ ಮುಖ್ಯಸ್ಥನ ಅಚ್ಚರಿಯ ಹೇಳಿಕೆ

ಸೋಮವಾರ, 16 ಏಪ್ರಿಲ್ 2018 (09:42 IST)
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿದವರು ಭಾರತದ ಮುಸ್ಲಿಮರಲ್ಲ. ಭಾರತೀಯರು ಯಾರೂ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ವಿದೇಶೀ ಶಕ್ತಿಗಳು ಇಲ್ಲಿನ ಭಾರತೀಯರ ನೈತಿಕತೆ ಮುರಿಯಲು ಈ ಕೆಲಸ ಮಾಡಿದರು ಎಂದು ಕಾರ್ಯಕ್ರಮವೊಂದರಲ್ಲಿ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.

‘ಬಾಹ್ಯ ಶಕ್ತಿಗಳಿಂದ ರಾಮಮಂದಿರ ಧ್ವಂಸವಾಯಿತು. ಇದೀಗ ಮತ್ತೆ ಅದನ್ನು ನಿರ್ಮಿಸುವ ಕೆಲಸ ನಮ್ಮಿಂದ ಆಗಬೇಕಿದೆ’ ಎಂದು ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ