ಶಬರಿಮಲೆಯಲ್ಲಿ ಕಾಲ್ತುಳಿತ; 25 ಭಕ್ತರಿಗೆ ಗಾಯ

ಸೋಮವಾರ, 26 ಡಿಸೆಂಬರ್ 2016 (08:45 IST)
ಕೇರಳದ ಪುರಾಣ ಪ್ರಸಿದ್ಧ ಶಬರಿಲೆಯಲ್ಲಿ ಭಾನುವಾರ ಸಂಭವಿಸಿದ ನೂಕುನುಗ್ಗಲಿನಲ್ಲಿ ಕನಿಷ್ಠ 25 ಮಂದಿ ಗಾಯಗೊಂಡಿದ್ದು ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಭಾನುವಾರ ಸಂಜೆಯ ಪೂಜೆ ಸಮಯದಲ್ಲಿ ಮಣಿಕಂಠನಿಗೆ ಥಂಗ ಅಂಗಿಯ ಆಭರಣಗಳನ್ನು ತೊಡಿಸಲಾಗುತ್ತಿತ್ತು. ಆ ಸಮಯದಲ್ಲಿ ಸ್ವಾಮಿಯ ದರ್ಶನಕ್ಕೆ ಭಕ್ತರ ಸಮೂಹ ಕಾತರಿಸಿದ್ದರಿಂದ ದೇಗುಲದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡರು.
 
ಗಂಭೀರವಾಗಿ ಗಾಯಗೊಂಡಿರುವವರಿಗೆ ಪಂಬಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಆಂಧ್ರದವರೆಂದು ತಿಳಿದುಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ