ಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದವರಿಗೆ ತಕ್ಕ ಉತ್ತರ ನೀಡಿದ ಸಿಎಂ

ಶನಿವಾರ, 9 ಮಾರ್ಚ್ 2019 (06:43 IST)
ನವದೆಹಲಿ : ಜೆಡಿಎಸ್ ಕಾರ್ಯಕರ್ತರು ಎಷ್ಟು ಜನರನ್ನು ಅಪೇಕ್ಷೆ ಮಾಡುತ್ತಾರೆ ಅಷ್ಟು ಜನ ನಮ್ಮ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳುವುದರ ಮೂಲಕ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದವರಿಗೆ ತಕ್ಕ ಉತ್ತರ ನೀಡದ್ದಾರೆ.


ದೆಹಲಿಯಲ್ಲಿ ಮಾತನಾಡಿದ ಅವರು 'ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ..? ಕುಟುಂಬ ರಾಜಕೀಯಕ್ಕೆ ನೂರು ಉದಾಹರಣೆ ಕೊಡಬಲ್ಲೆ. ನಾವ್ಯಾರು ಕೂಡ ಹಿಂದಿನ ಬಾಗಿಲಿನಿಂದ ಬಂದವರಲ್ಲ, ಜನರ ವಿಶ್ವಾಸ ಗಳಿಸಿ ಆಯ್ಕೆಯಾಗಿ ಬಂದಿದ್ದೇವೆ’ ಎಂದು ಹೇಳಿದ್ದಾರೆ.


‘ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧಿಸುವುದು ಬೇಡ ಎಂದು ನಾನು ಹೇಳಿಲ್ಲ, ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮಾಡುವುದು ಅನಾವಶ್ಯಕ, ನಮ್ಮ ಪಕ್ಷದ ವತಿಯಿಂದ ಜನರ ಮುಂದೆ ಹೋಗುತ್ತೇನೆ. ಅಭಿವೃದ್ದಿ ಕೆಲಸಗಳನ್ನು ಜನರ ಮುಂದಿಡುತ್ತೇವೆ. ಜೆಡಿಎಸ್ ಹಾಗೂ ಮಂಡ್ಯಕ್ಕೆ ಇರುವ ಅನುಬಂಧ ದೊಡ್ಡದಿದೆ’ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ