ಜೈಲಿನಿಂದ ಹೊರಬಂದ ಬೆನ್ನಲ್ಲೇ ಮತ್ತೊಬ್ಬ ಮಹಿಳೆಯ ಕೊಂದ ಪಾಪಿ

ಸೋಮವಾರ, 15 ನವೆಂಬರ್ 2021 (11:35 IST)
ಮುಂಬೈ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಶಿಕ್ಷೆ ಮುಗಿಸಿ ಹೊರಬಂದ ತಿಂಗಳಲ್ಲೇ ಮತ್ತೊಂದು ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

2016 ರಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಆರೋಪದಲ್ಲಿ ಸಾಗರ್ ಯಾದವ್ ಎಂಬ ಆರೋಪಿ ಜೈಲು ಸೇರಿದ್ದ. ಇದೀಗ ಶಿಕ್ಷೆ ಮುಗಿಸಿ ಕಳೆದ ತಿಂಗಳಷ್ಟೇ ಆತ ಜೈಲಿನಿಂದ ಹೊರಬಂದಿದ್ದ.

ಇದೀಗ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡಿದ್ದಾನೆ. ಈ ಹಿಂದೆ ಮಹಿಳೆ ಮತ್ತು ಆಕೆಯ ಗಂಡ ತನಗೆ ವಂಚಿಸಿದ್ದಾನೆ ಎಂಬ ಸಿಟ್ಟಿಗೆ ಈಗ ಆರೋಪಿ ಸೇಡು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ. ಇದೀಗ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ