ಅಯೋಧ್ಯೆಯಲ್ಲಿ ರಾಮಭಕ್ತರಿಗೆ ಮೃಷ್ಟಾನ್ನ ಭೋಜನ

geetha

ಶುಕ್ರವಾರ, 26 ಜನವರಿ 2024 (21:00 IST)
ಅಯೋಧ್ಯೆ :ಇಸ್ಕಾನ್‌, ಮಹಾವೀರ್‌ ಟೆಂಪಲ್‌ ಟ್ರಸ್ಟ್‌ ಹಾಗೂ  ನಿಹಾಂಗ್‌ ಸಿಖ್ಸ್‌  ಸಂಸ್ಥೆಗಳ ಸಹಯೋಗದಲ್ಲಿ ಈ ಉಚಿತ ಭೋಜನ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದು ದಿನದ 24 ತಾಸು ಎಡೆಬಿಡದೇ ಕಾರ್ಯ ನಿರ್ವಹಿಸಲಿದೆ. ರಾಮಮಂದಿರ ಉದ್ಘಾಟನೆಗೊಂಡ ದಿನದಿಂದ ದಿನೇದಿನೇ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಸಾಗಿದೆ. ಅಯೋಧ್ಯೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿಂಡಿ ತೀರ್ಥಗಳ ಬೆಲೆ ಗಗನಕ್ಕೆ ಮುಟ್ಟಿದೆ.

ಈ ಹಿನ್ನೆಲೆಯಲ್ಲಿ ರಾಮಭಕ್ತರ ಹಸಿವು ತಣಿಸಲು ಉಚಿತ ಭೋಜನ ಪೂರೈಸುವ ಅರವಟ್ಟಿಗೆಗಳನ್ನು ತೆರೆಯಲಾಗಿದೆ. ಭಕ್ತಾದಿಗಳಿಗೆ ಕಿಚಡಿ, ಪೂರಿ, ಕಡಿ ಚಾವಲ್‌, ಉಪ್ಪಿನಕಾಯಿ, ಹಪ್ಪಳಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ಅಯೋಧ್ಯೆಯಲ್ಲಿ ವಿಪರೀತ ಚಳಿ ಇರುವುದರಿಂದ ಬಿಸಿಬಿಸಿ ಚಹಾ ವ್ಯವಸ್ಥೆ ಕೂಡ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ