ನನ್ನ, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಪಂಚ ಪ್ರಾಣಿ ಬಲಿ: ಡಿಕೆ ಶಿವಕುಮಾರ್

sampriya

ಗುರುವಾರ, 30 ಮೇ 2024 (19:48 IST)
Photo By X
ಬೆಂಗಳೂರು: ನನ್ನ, ಸಿಎಂ ಸಿದ್ದರಾಮಯ್ಯ ಮತು ಕಾಂಗ್ರೆಸ್‌ ವಿರುದ್ಧ ಕೇರಳದ ದೇವಸ್ಥಾನವೊಂದರಲ್ಲಿ ಶತ್ರು ನಾಶ ಮಾಡುವಂತೆ ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.‌

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೀಯುತಿದ್ದು, 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ರೀತಿ ಯಾರೆಲ್ಲ ಮಾಡುತ್ತಿದ್ದಾರೆಂಭ ಕಚಿತ ಮಾಹಿತಿಯಿದ್ದು, ಹೆಸರು ಹೇಳಲು ನಿರಾಕರಿಸಿದರು.

ಅಘೋರಿಗಳ ಮೂಲಕ ಈ ಯಾಗ ಮಾಡುತ್ತಿದ್ದು, ಇದು ಕೇರಳದಲ್ಲಿ ನಮ್ಮ ಸರ್ಕಾರದ ವಿರುದ್ಧ ನನ್ನ ವಿರುದ್ಧ ದೊಡ್ಡ ಪ್ರಯೋಗ ನಡೆಯುತ್ತಿದೆ. ಇನ್ನೂ ಈ ಆಚರಣೆಗಳ ಬಗ್ಗೆ ನಂ ಬಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದು ಒಬ್ಬರ ನಂಬಿಕೆಯ ಮೇಲೆ. ಅವರು ನನ್ನ ವಿರುದ್ಧ ಯಾವುದೇ ಪ್ರಯೋಗ ಮಾಡಲಿ. ನಾನು ನಂಬುವ ಶಕ್ತಿ ನನ್ನನ್ನು ಕಾಪಾಡುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ