ಕೇದಾರನಾಥದಲ್ಲಿ ಮೋದಿ ಶೂ ತೆಗೆಯಲು ಮುಂದಾದ ವ್ಯಕ್ತಿ..!

ಬುಧವಾರ, 3 ಮೇ 2017 (19:56 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉತ್ತರಾಖಂಡ್`ನ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭ ನನ್ನ ಮನಸ್ಸಿನಲ್ಲಿ ವಿಐಪಿ ಸಮಸ್ಕೃತಿ ಇಲ್ಲ ಎಂಬುದನ್ನ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ.
 

ನರೇಂದ್ರಮೋದಿ ಕೇಧಾರನಾಥ ದೇಗುಲ ಪ್ರವೇಶಕ್ಕೂ ಮುನ್ನ ಕೇದಾರಧಾಮದಲ್ಲಿ ಶೂ ತೆಗೆಯಲು ಮುಂದಾದ ಸಮೀಪದಲ್ಲಿದ್ದ ವ್ಯಕ್ತಿ ಮೋದಿಯ ಶೂ ತೆಗೆಯಲು ಯತ್ನಿಸಿದ್ದಾನೆ. ಈ ಸಂದರ್ಭ ಆತನನ್ನ ತಡೆದ ಮೋದಿ ಶೂ ಮುಟ್ಟಿಸಲಿಲ್ಲ. ತಾವೇ ಶೂ ತೆಗೆದಿದ್ದಾರೆ.

ಬಳಿಕ ದೇಗಲಕ್ಕೆ ತೆರಳಿ ರುದ್ರಾಭಿಷೇಕ ನೆರವೇರಿಸಿದ ಮೋದಿ, ಕೆಲ ಕಾಲ ಕುಳಿತು ಪ್ರಾರ್ಥನೆ ಮಾಡಿದರು. ವಿಐಪಿ ಸಂಸ್ಕೃತಿ ಮನಸ್ಸಿನಿಂದಲೂ ತೊಲಗಬೇಕಿದೆ ಎಂದು ಈ ವಾರದ ಮನ್ ಕೀ ಬಾತ್`ನಲ್ಲಿ ಹೇಳಿದಂತೆ ಮೋದಿ ನಡೆದುಕೊಂಡಿದ್ಧಾರೆ.

ವೆಬ್ದುನಿಯಾವನ್ನು ಓದಿ