ಮುಂಬೈಗೆ ಇಂದು ‘ನಿಸರ್ಗ’ದ ಭೀತಿ

ಬುಧವಾರ, 3 ಜೂನ್ 2020 (10:20 IST)
ಮುಂಬೈ: ಕೊರೋನಾದಿಂದ ತತ್ತರಿಸಿರುವ ಮುಂಬೈ ಮಹಾನಗರಕ್ಕೆ ಇಂದು ನಿಸರ್ಗ ಚಂಡಮಾರುತದ ಅಪ್ಪಳಿಸಿದ್ದು, ಭೀತಿಯ ವಾತಾವರಣ ಮನೆ ಮಾಡಿದೆ.


ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ  ವಾಯುಭಾರ ಕುಸಿತದ ತೀವ್ರವಾಗಿರುವ ಹಿನ್ನಲೆಯಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಮುಂಬೈಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಚಂಡಮಾರುತ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇರಳದಲ್ಲೂ ಭಾರೀ ಮಳೆಯಾಗುತ್ತಿದೆ. ಕೊರೋನಾದಿಂದಾಗಿ ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೀಡಾಗಿರುವ ವಾಣಿಜ್ಯ ನಗರಿ ಮುಂಬೈಗೆ ಚಂಡಮಾರುತ ಮತ್ತಷ್ಟು ನಷ್ಟ ಉಂಟುಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ