ಭಾರತದ ಯೋಧರ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆ

ಸೋಮವಾರ, 1 ಮೇ 2017 (15:51 IST)
ನೆರೆಯ ಪಾಕಿಸ್ತಾನ ಮತ್ತೆ ತನ್ನ ಕ್ರೂರ ರೂಪವನ್ನ ಪ್ರದರ್ಶಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್`ನಲ್ಲಿ ಇಬ್ಬರು ಭಾರತೀಯ ಯೋಧರನ್ನ ಕೊಂದಿರುವ ಪಾಕಿಸ್ತಾನ ಸೇನೆ ಅವರ ಶಿರಚ್ಛೇದನಾ ಮಾಡಿದೆ.

ಸೋಮವಾರ ಯುದ್ಧ ವಿರಾಮ ಉಲ್ಲಂಘಿಸಿ ಗಡಿ ಪ್ರವೇಶಿಸಿರುವ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಫೋರ್ಸ್ ಸಿಬ್ಬಂದಿ ಕೃಷ್ಣಘಾಟಿ ವಲಯದಲ್ಲಿ ಭಾರತೀಯ ಸೇನಾ ಕ್ಯಾಂಪ್ ಮೇಲೆ ಏಕಾಏಕಿ ರಾಕೆಟ್ ಮತ್ತು ಆಟೋಮೆಟಿಕ್ ವೆಪನ್`ಗಳ ಮೂಲಕ ದಾಳಿ ನಡೆಸಿದ್ದು,  ಯೋಧರನ್ನ ಕೊಂದು ಅವರ ಶಿರಚ್ಛೇದನಾ ಮಾಡಲಾಗಿದೆ.

ಪಾಕಿಸ್ತಾನದ ಈ ಕ್ರೂರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸೇಡು ತೀರಿಸಿಕೊಂಡೇ ತೀರುತ್ತೇವೆ ಎಂದು ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ