ನಿಯತ್ತು ಎಂದರೆ ಹೀಗಿರಬೇಕು, ಪವನ್ ಕಲ್ಯಾಣ್ ಮಾತಿಗೆ ಮೆಚ್ಚಿದ ಜನ

Krishnaveni K

ಗುರುವಾರ, 6 ಜೂನ್ 2024 (11:19 IST)
ನವದೆಹಲಿ: ಜನಸೇನಾ ಪಕ್ಷದ ನೇತಾರ, ನಟ ಪವನ್ ಕಲ್ಯಾಣ್ ಇದೀಗ ಕೇಂದ್ರದಲ್ಲಿ ಎನ್ ಡಿಎ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಅವರ ನಿಯತ್ತು ನೋಡಿ ಜನ ಈಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
 
ಜನಸೇನಾ ಪಕ್ಷ ಚುನಾವಣೆ ಪೂರ್ವದಿಂದಲೂ ಬಿಜೆಪಿಗೆ ಬೆಂಬಲ ಘೋಷಿಸಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುತಮ ಬಂದಿಲ್ಲ. ಹೀಗಾಗಿ ಜನಸೇನಾ, ಟಿಡಿಪಿ, ಜೆಡಿಯು ಮುಂತಾದ ಮಿತ್ರ ಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸುತ್ತಿದೆ.
 
ಈ ನಡುವೆ ಇಂಡಿಯಾ ಒಕ್ಕೂಟ ಕೂಡಾ ಈ ಪಕ್ಷಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ತಮ್ಮ ಪಕ್ಷಕ್ಕೆ ನೀಡಿದ ಆಫರ್ ನ್ನು ಪವನ್ ತಿರಸ್ಕರಿಸಿದ್ದಾರೆ. ಈ ಬಗ್ಗೆ ಅವರು ನೀಡಿದ ಹೇಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 
 
‘ಒಂದು ವೇಳೆ ಕಾಂಗ್ರೆಸ್ ನನಗೆ ಪ್ರಧಾನ ಮಂತ್ರಿಯ ಪೋಸ್ಟ್ ನೀಡಿದರೂ ನಾನು ಅವರ ಜೊತೆ ಹೋಗಲಾರೆ. ನನಗೆ ಮೋದಿಜೀಯವರೇ ಮುಖ್ಯ’ ಎಂದಿದ್ದಾರೆ. ಅವರ ಈ ಹೇಳಿಕೆ ನೋಡಿ ನೆಟ್ಟಿಗರು ನಿಯತ್ತು ಎಂದರೆ ಹೀಗಿರಬೇಕು ಎಂದು ಹೊಗಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ