ಕೊರೊನಾ ಲಸಿಕೆಯ ಮೇಲೆ ಜನರು ನಂಬಿಕೆ ಇಡಿ- ಕೇಂದ್ರ ಆರೋಗ್ಯ ಸಚಿವರಿಂದ ಸಲಹೆ

ಶನಿವಾರ, 2 ಜನವರಿ 2021 (11:49 IST)
ನವದೆಹಲಿ : ಇಂದು ದೇಶದಾದ್ಯಂತ ಕೊರೊನಾ ಲಸಿಕೆ ಡ್ರೈ ರನ್ ಗೆ ಚಾಲನೆ ನೀಡಲಾಗಿದೆ. ಇಂದು ದೇಶದ 116 ಜಿಲ್ಲೆ, 259 ಕೇಂದ್ರಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದೆ.

ದೆಹಲಿಯಲ್ಲೂ ಇಂದು ಕೊರೊನಾ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗುತ್ತಿದ್ದು,  ದರಿಯಾಗಂಜ್ ನಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಕೇಂದ್ರಕ್ಕೆ ಕೇಂದ್ರ ಆರೋಗ್ಯ ಸಚಿವ  ಡಾ.ಹರ್ಷವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆಯ ಮೇಲೆ ಜನರು ನಂಬಿಕೆ ಇಡಿ. ಯಾವುದೇ ಊಹಾಪೋಹಾಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ