ನಮ್ಮ ಪಕ್ಷದ 10 ಶಾಸಕರನ್ನು ಬಂಧಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಆಪ್ ಶಾಸಕನ ನಿವಾಸದ ಮೇಲೆ ದಾಳಿ ಮಾಡಿದೆ. 21 ಶಾಸಕರನ್ನು ಅನರ್ಹಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಂಸದ ಭಗವಂತ್ ಮಾನ್ನನ್ನು ಅಮಾನತ್ತು ಮಾಡಲಾಗಿದೆ. ಮನೀಷ್ ಸಿಸೋಡಿಯಾ ವಿರುದ್ಧದ ತನಿಖೆ, ಸಿಬಿಐ ದಾಳಿಗಳನ್ನು ನೋಡಿದಲ್ಲಿ ಇದೊಂದು ದಮನ್ ಚಕ್ರ ಅನ್ನಿಸದೆ ಇರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಏನು ಮಾಡದಿದ್ದರೂ ಪ್ರತಿದಿನ ನಾನು ಮೋದಿ ವಿರುದ್ಧ ಆರೋಪ ಮಾಡುತ್ತಿದ್ದೇನೆ ಎಂದು ಜನತೆ ಹೇಳುತ್ತಾರೆ. ಆದರೆ, ಆದಾಯ ತೆರಿಗೆ ಇಲಾಖೆ ದಾಳಿ, ದೆಹಲಿ ಪೊಲೀಸ್ ಮತ್ತು ಸಿಬಿಐ ದಾಳಿಗಳ ಹಿಂದೆ ಒಬ್ಬ ಮಾಸ್ಟರ್ಮೈಂಡ್ ಖಂಡಿತವಾಗಿಯೂ ಇರುತ್ತಾರೆ. ಮೋದಿ, ಪಿಎಂಓ ಕಚೇರಿ ಮತ್ತು ಅಮಿತ್ ಶಾ ನಮ್ಮ ವಿರುದ್ಧ ಒಂದಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.