ನವಿಲಿಗೆ ತಿನಿಸಲು ಸಭೆ ಮಧ್ಯದಲ್ಲೇ ಎದ್ದು ಹೋಗಿದ್ದರು: ಅಮಿತ್‌ ಶಾ

ಗುರುವಾರ, 12 ಮೇ 2022 (16:16 IST)
ಪ್ರಧಾನಿ ನರೇಂದ್ರ ಮೋದಿ ಎಷ್ಟು ಭಾವುಕರು ಅಂದರೆ ನವಿಲಿಗೆ ತಿನಿಸಲು ಒಂದು ಬಾರಿ ಅತ್ಯಂತ ಮುಖ್ಯವಾದ ಸಭೆಯ ಮಧ್ಯದಲ್ಲೇ ಎದ್ದು ಹೋಗಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
ಮೋದಿ ಅವರ ರಾಜಕೀಯ ಜೀವನ ಆಧರಿಸಿದ ಮೋದಿ @20: ಡ್ರೀಮ್ಸ್‌ ಮೀಟ್‌ ಡೆಲಿವರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಮುಖ್ಯವಾದ ಸಭೆ ನಡೆಯುತ್ತಿದ್ದಾಗ ಮೋದಿ ನವಿಲಿನ ಹಸಿವಿನ ಬಗ್ಗೆ ಗಮನ ಹರಿಸಿದ್ದು ನೋಡಿ ಅಚ್ಚರಿ ಆಗಿತ್ತು ಎಂದರು.
ಸಭೆ ನಡೆಯುತ್ತಿದ್ದಾಗ ನವಿಲು ಗಾಜಿನ ಗ್ಲಾಸ್‌ ಉರುಳಿಸಿತ್ತು. ಇದನ್ನು ಗಮನಿಸಿದ ಅವರು ನವಿಲು ಎಷ್ಟು ಹಸಿದಿದೆ ಎಂದು ತಿಳಿದುಕೊಂಡು ಕೂಡಲೇ ಆ ಕಡೆ ಗಮನ ಹರಿಸಿದರು. ನವಿಲಿನ ಹಸಿವು ಗುರುತಿಸಿ ಸಭೆಯ ನಡುವೆ ಆ ಕಡೆ ಗಮನ ಹರಿಸಿದ್ದಾರೆಂದರೆ ಅವರು ಎಷ್ಟು ಭಾವನಾತ್ಮಕ ಜೀವಿ ಎಂಬುದು ತಿಳಿಯುತ್ತದೆ ಎಂದು ಅಮಿತ್‌ ಶಾ ವಿವರಿಸಿದರು.
2020ರಲ್ಲಿ ಪ್ರಧಾನಿ ಮೋದಿ ನವಿಲಿಗೆ ಆಹಾರ ತಿನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾಕಷ್ಟು ಸುದ್ದಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ