ವಾಚಾಳಿ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸ್ಟ್ರಾಂಗ್ ಮೆಸೇಜ್!

ಸೋಮವಾರ, 17 ಏಪ್ರಿಲ್ 2017 (04:58 IST)
ನವದೆಹಲಿ: ಬಿಜೆಪಿ ನಾಯಕರು ಆಗಾಗ ಎಗ್ಗಿಲ್ಲದೆ ನಾಲಿಗೆ ಹರಿಯಬಿಟ್ಟು ಕಟು ಟೀಕೆಗೆ ಒಳಗಾಗುವುದಲ್ಲದೆ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಾರೆ. ಅಂತಹ ನಾಯಕರಿಗೆ ಪ್ರಧಾನಿ ಮೋದಿ ಕಠಿಣ ಸಂದೇಶ ರವಾನಿಸಿದ್ದಾರೆ.

 
‘ಅಧಿಕಾರದಲ್ಲಿರುವ ನಾಯಕರು ಮೌನಕ್ಕೆ ಶರಣಾಗುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು’ ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಗಮನ ಕೇವಲ ಉತ್ತಮ ಆಡಳಿತವಷ್ಟೇ ಆಗಿರಬೇಕು ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ.

ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಆಡಳಿತವಿರುವ 13 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ