ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ಬುಧವಾರ, 3 ಮೇ 2017 (10:18 IST)
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಉತ್ತರಾಖಂಡ್ ಗೆ ಬಂದಿಳಿದಿದ್ದು, ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

 
ಮಿಲಿಟರಿ ಹೆಲಿಕಾಪ್ಟರ್ ನಲ್ಲಿ ಕೇದಾರನಾಥಕ್ಕೆಬ ಬಂದಿಳಿದ ಅವರು, ಬಿಗಿ ಭದ್ರತೆಯಲ್ಲಿ ಕೇದರನಾಥನಿಗೆ ಪೂಜೆ ಸಲ್ಲಿಸಿದರು. ಇಂದು ಭಕ್ತರಿಗಾಗಿ ದೇವಾಲಯ ತೆರೆದಿರಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೇದಾರನಾಥನ ದರ್ಶನ ಪಡೆದ ಮೇಲೆ ಪತಂಜಲಿ ಯೋಗಪೀತ್ ನಲ್ಲಿ ಪತಂಜಲಿ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸುವುದಾಗಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ