‘ಇಂಜಿನಿಯರ್’ ರೌಡಿಯ ಹಿಡಿಯಲು ಈ ಪೊಲೀಸರು ಎಂಥಾ ಸಾಹಸ ಮಾಡಿದರು ಗೊತ್ತಾ?!

ಗುರುವಾರ, 25 ಅಕ್ಟೋಬರ್ 2018 (08:52 IST)
ನವದೆಹಲಿ: ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ದರೋಡೆಕೋರನೊಬ್ಬನನ್ನು ಹಿಡಿಯಲು ದೆಹಲಿ ಪೊಲೀಸರು ಭಾರೀ ಸಾಹಸವನ್ನೇ ಮಾಡಿದ್ದಾರೆ.

ಅಕ್ಷಯ್ ದಗಾರ್ ಎಂಬಾತ ಇಂಜಿನಿಯರ್ ವೃತ್ತಿಯಲ್ಲಿದ್ದವ ನಂತರ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ.  ಈತ ಇದೀಗ ವಿರೋಧಿ ಗುಂಪಿನ ಇಬ್ಬರು ರೌಡಿಗಳ ಕೊಲೆ ಆರೋಪದಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ.

ಈತನಿಗಾಗಿ ಜಾಲ ಬೀಸಿದ್ದ ದೆಹಲಿ ಪೊಲೀಸರ ವಿಶೇಷ ತಂಡಕ್ಕೆ ಈತ ಹರ್ಯಾಣದ ಗ್ರಾಮವೊಂದರಲ್ಲಿರುವುದು ಗೊತ್ತಾಯಿತು. ಆದರೆ ಪೊಲೀಸರನ್ನು ಕಂಡೊಡನೆ ಕಾರು ಹತ್ತಿ ಪರಾರಿಯಾಗಲು ಯತ್ನಿಸಿದ ಅಕ್ಷಯ್ ಹಿಂದೆ ಬಿದ್ದ ಪೊಲೀಸರು ಬರೋಬ್ಬರಿ 150 ಕಿ.ಮೀ.ಗಳಷ್ಟು ದೂರದವರೆಗೆ ಚೇಸ್ ಮಾಡಿ ಕೊನೆಗೂ ಆರೋಪಿಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಇದೀಗ ಈತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ