ಶೀಘ್ರದಲ್ಲೇ ವಯನಾಡಿಗೆ ರಾಹುಲ್, ಪ್ರಿಯಾಂಕಾ ಗಾಂಧಿ ಭೇಟಿ: ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ ಅವರಿಗೆ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಂದ್ರ ಸರ್ಕಾರದೊಂದಿಗೆ ಪರಿಹಾರ, ವೈದ್ಯಕೀಯ ನೆರವು ಮತ್ತು ಪರಿಹಾರವನ್ನು ನೀಡಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಂಗಳವಾರ ಬೆಳಿಗ್ಗೆ ವಯನಾಡ್ನಲ್ಲಿ ಕನಿಷ್ಠ ಎರಡು ಭಾರಿ ಭೂಕುಸಿತಗಳು ಸಂಭವಿಸಿದ್ದು, ವ್ಯಾಪಕ ನಾಶಕ್ಕೆ ಕಾರಣವಾಯಿತು. ಮೊದಲನೆಯದು ಮುಂಡಕ್ಕೈ ಎಂಬ ಪಟ್ಟಣದಲ್ಲಿ ಮತ್ತು ಎರಡನೆಯದು ಚೂರಲ್ಮಲಾದಲ್ಲಿ ಸಂಭವಿಸಿದೆ. ಭಾರೀ ಭೂಕುಸಿತಕ್ಕೆ ಆ ಪ್ರದೇಶ ನಡುಗಿ ಹೋಗಿದೆ. 400ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ.