ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆ: ಬಿಜೆಪಿ ಮಾಜಿ ಕಾರ್ಯಕರ್ತನ ಕೈವಾಡ?

ಮಂಗಳವಾರ, 25 ಅಕ್ಟೋಬರ್ 2016 (16:56 IST)
ಕಳೆದ ವಾರ ಶಿವಾಜಿನಗರದಲ್ಲಿ ನಡೆದ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆ ಹಿಂದೆ ಬಿಜೆಪಿ ಮಾಜಿ ಕಾರ್ಯಕರ್ತನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. 

35 ವರ್ಷದ ಆರ್‌ಎಸ್ಎಸ್ ಕಾರ್ಯಕರ್ತ ರುದ್ರೇಶ್‌ನನ್ನು ಭಾನುವಾರ ಅಕ್ಟೋಬರ್ 16 ರಂದು ಕಾಮರಾಜ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದು ರಾಜಕೀಯ ಉದ್ದೇಶಕ್ಕಾಗಿ ನಡೆದ ಕೊಲೆ ಎಂಬುದನ್ನು ತಳ್ಳಿ ಹಾಕಿದ್ದಾರೆ.
 
ಬಿಜೆಪಿಯ ಮಾಜಿ ಕಾರ್ಯಕರ್ತ ಮತ್ತು ರುದ್ರೇಶ್ ನಡುವಿದ್ದ ವಿವಾದವೇ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಹೇಳುತ್ತಿದ್ದು ಇದು ಸುಫಾರಿ ನೀಡಿ ಹತ್ಯೆಗೆಯ್ಯಲಾಗಿದೆ ಎಂದು ಶಂಕಿಸಲಾಗಿದೆ. 
 
ಆದಷ್ಟು ಬೇಗ ಶಂಕಿತನನ್ನು ಬಂಧಿಸಿ ವಿಚಾರಣೆಗೊಳಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ