ದಿನಕರನ್ ಮತ್ತು 18 ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಕೇಸ್ ದಾಖಲು
ಪ್ರಾಥಮಿಕ ಮಾಹಿತಿ ಪ್ರಕಾರ, ಸೇಲಂನ ಅನ್ನದಾನಪಟ್ಟಿ ಪೊಲೀಸ್ ಠಾಣೆಯಲ್ಲಿ ಕೆ.ಆರ್.ಎಸ್. ಸರವಣನ್ ಎಂಬಾತ ದೂರು ದಾಖಲಿಸಿದ್ದ. ಸೆಪ್ಟೆಂಬರ್ 29ರಂದು ದಿನಕರನ್ ಬೆಂಬಲಿಗರು ಸರ್ಕಾರದ ವಿರುದ್ಧ ಪಾಂಪ್ಲೇಟ್ ಹಂಚಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ನೀಟ್ ಬಗ್ಗೆ ತಪ್ಪು ಮಾಹಿತಿ ಮುದ್ರಿಸಿ ಸರ್ಕಾರದ ವಿರುದ್ಧ ಜನರನ್ನ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆಂದೂ ದೂರಿನಲ್ಲಿ ಆರೋಪಿಸಲಾಗಿತ್ತು.ಇತ್ತೀಚೆಗೆ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಂಡಿದ್ದ 18 ಶಾಸಕರು ಸಹ ೀ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.