ಸುಷ್ಮಾ ಸ್ವರಾಜ್ ಕೊನೆಯ ಆಸೆ ಪೂರೈಸಿದ ಪುತ್ರಿ

ಶನಿವಾರ, 28 ಸೆಪ್ಟಂಬರ್ 2019 (09:07 IST)
ನವದೆಹಲಿ: ಜನಪ್ರಿಯ ಬಿಜೆಪಿ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾವಿಗೆ ಕೆಲವೇ ಗಂಟೆಗಳ ಮೊದಲು ಮಾಡಲು ಬಯಸಿದ್ದ ಕೆಲವೊಂದನ್ನು ಪುತ್ರಿ ಬಾನ್ಸುರಿ ಇದೀಗ ಮಾಡಿ ಮುಗಿಸುವ ಮೂಲಕ ಅಮ್ಮನ ಕೊನೆಯಾಸೆ ಪೂರೈಸಿದ್ದಾಳೆ.


ಸುಷ್ಮಾ ವಿದೇಶಾಂಗ ಸಚಿವೆಯಾಗಿದ್ದಾಗ ಪಾಕ್ ನಲ್ಲಿ ಬಂಧಿತರಾಗಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಕುಲಭೂಷಣ್ ಯಾದವ್ ಪ್ರಕರಣವನ್ನು ವಾದಿಸಿ ಮರಣದಂಡನೆ ತಪ್ಪಿಸುವಲ್ಲಿ ಖ್ಯಾತ ವಕೀಲ ಹರೀಶ್ ಸಾಳ್ವೆ ಯಶಸ್ವಿಯಾಗಿದ್ದರು.

ಸುಷ್ಮಾ ಸಾವಿಗೆ ಕೆಲವೇ ಗಂಟೆಗಳ ಮೊದಲು ಹರೀಶ್ ಸಾಳ್ವೆಗೆ ಕರೆ ಮಾಡಿ ಈ ಪ್ರಕರಣದಲ್ಲಿ ಯಶಸ್ವಿಯಾಗ ವಾದ ಮಂಡಿಸಿದ್ದಕ್ಕೆ ನಿಮಗೆ ನಾನು 1 ರೂ. ಫೀಸ್ ಕೊಡಬೇಕು. ಮನೆಗೆ ಬಂದು ಪಡೆಯಿರಿ ಎಂದು ಆತ್ಮೀಯವಾಗಿ ಕೋರಿದ್ದರಂತೆ. ಆದರೆ ಹೀಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಸುಷ್ಮಾ ಇಹಲೋಕ ತ್ಯಜಿಸಿದ್ದರು. ಸುಷ್ಮಾ ಸ್ವರಾಜ್ ಸಾವಿನ ಬಳಿಕ ಹರೀಶ್ ಸಾಳ್ವೆ ಈ ವಿಚಾರವನ್ನು ದುಃಖದಿಂದಲೇ ಹೇಳಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ