ಸದನದಲ್ಲಿ ಕೇವಲ ನಾವು ಹಾಡುವುದಕ್ಕೆ, ಕುಣಿಯುವದಕ್ಕೆ ಮಾತ್ರ ಸೀಮಿತ-ತೇಜಸ್ವಿ ಯಾದವ್‌

geetha

ಸೋಮವಾರ, 12 ಫೆಬ್ರವರಿ 2024 (18:33 IST)
ಬಿಹಾರ :  ಸದನದಲ್ಲಿ ಕೇವಲ ನಾವು ಹಾಡುವುದಕ್ಕೆ, ಕುಣಿಯುವದಕ್ಕೆ ಮಾತ್ರ ಸೀಮಿತವಾಗಿದ್ದೇವೆ ಎಂದು  ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿಷಾದ ವ್ಯಕ್ತಪಡಿಸಿದ್ದಾರೆ.ಸೋಮವಾರ ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್‌ ಕುಮಾರ್‌ ವಿಶ್ವಾಸ ಮತ ಕೋರಲಿದ್ದು, ಇದಕ್ಕೂ ಮುನ್ನ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾತನಾಡಿದರು. ತೇಜಸ್ವಿ ಯಾದವ್‌, ನಿತೀಶ್ ಅವರು ಮತ್ತೆ ಪಕ್ಷ ಬದಲಿಸುವುದಿಲ್ಲ‌ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಬಲ್ಲರೇ ಎಂದು ಸವಾಲೆಸೆದರು.

ನಾವು ಸಮಾಜವಾದಿ ಕುಟುಂಬದಿಂದ ಬಂದಿದ್ದೇವೆ. ನಿತೀಶ್‌ ಕುಮಾರ್‌ ಸಹ ನಮ್ಮ ಕುಟುಂಬದ ಸದಸ್ಯ ಎಂದು ನಾವು ಭಾವಿಸಿದ್ದೇವೆ.  ಪ್ರಧಾನಿ ಮೋದಿ ಆಳ್ವಿಕೆಯನ್ನು ತಡೆಯಬೇಕಿದೆ ಎಂದು ನೀವು ಬಾವುಟ ಹಿಡಿದು ಹೊರಟಿದ್ದ ನೀವು ಈಗ ಅದೇ ಪಕ್ಷ ಸೇರಿದ್ದೀರಿ ಎಂದು ಟೀಕಿಸಿದ ತೇಜಸ್ವಿ ಯಾದವ್‌, ನಿತೀಶ್‌ ಅವರ ಬಗ್ಗೆ ನಮಗೆ ಯಾವತ್ತೂ ಗೌರವವಿದೆ. ನೀವು ರಾಜಭವನದಿಂದ ರಾಜೀನಾಮೆ ನೀಡಿ ಹೊರಬಂದಾಗ ನಮಗೆ ದುಃಖವಾಗಿತ್ತು. ನಾವು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದೆವು ಎಂದಿದ್ದಾರೆ. 
 
ಒಂಬತ್ತು ಬಾರಿ ಸಿಎಂ ಆಗಿ ದಾಖಲೆ ನಿರ್ಮಿಸಿರುವ ನಿತೀಶ್‌ ಅವರನ್ನು ಅಭಿನಂದಿಸುತ್ತೇನೆ. ಆದರೆ  ಈ ನೂತನ ಸರ್ಕಾರವನ್ನು ನಾನು ವಿರೋಧಿಸುತ್ತೇನೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ