ಬಹುಕೋಟಿ ವಂಚಕ ನೀರವ್ ಮೋದಿ ದೇಶಭ್ರಷ್ಟ, ಆರ್ಥಿಕ ಅಪರಾ‍ಧಿ ಎಂದ ಕೋರ್ಟ್

ಶುಕ್ರವಾರ, 6 ಡಿಸೆಂಬರ್ 2019 (06:27 IST)
ಮುಂಬೈ : ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಉದ್ಯಮಿ ನೀರವ್ ಮೋದಿಗೆ ದೇಶಭ್ರಷ್ಟ, ಆರ್ಥಿಕ ಅಪರಾ‍ಧಿ ಎಂದು ಕೋರ್ಟ್ ಘೋಷಣೆ ಮಾಡಿದೆ.



ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಪಡೆದ ಬಹುಕೋಟಿ ಹಣ ಮರುಪಾವತಿಸದೆ ವಂಚನೆ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.


ಇದೀಗ ದೇಶಕ್ಕೆ ದ್ರೋಹ ಬಗೆದ ನೀರವ್ ಮೋದಿಯನ್ನು ಅಕ್ರಮ ಹಣ ವರ್ಗಾವಣೆ ನಿಗ್ರಹ ವಿಶೇಷ(ಪಿಎಂಎಲ್ ಎ) ಕೋರ್ಟ್ ಗುರುವಾರ ದೇಶಭ್ರಷ್ಟ, ಆರ್ಥಿಕ ಅಪರಾ‍ಧಿ ಎಂದು ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ