ಇಂದು ಆರ್ ಬಿಐ ಗವರ್ನರ್ ಸುದ್ದಿಗೋಷ್ಠಿ; ಸಾಲ ಮರುಪಾವತಿಗೆ ಸಿಗಲಿದೆಯಾ ವಿನಾಯಿತಿ

ಶುಕ್ರವಾರ, 27 ಮಾರ್ಚ್ 2020 (10:06 IST)
ನವದೆಹಲಿ : ಜನರ ಸಾಲಮರುಪಾವತಿಗೆ ಸಂಬಂಧಪಟ್ಟಂತೆ ಇಂದು ಆರ್ ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.


ಇಂದು 10 ಗಂಟೆಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಾಲಮರುಪಾವತಿ, ಇಎಂಐ, ಇಸಿಎಸ್, ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಪರಿಹಾರ ಹಲವು ವಿನಾಯತಿ ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.


ಕೊರೊನಾ ಭೀತಿ ಹಿನ್ನಲೆ ಇಡೀ ದೇಶವೇ ಲಾಕ್ ಔಟ್ ಮಾಡಿದ ಕಾರಣ ಜನರಿಗೆ ಕೆಲಸವಿಲ್ಲದೆ ಹಣಕಾಸಿನದ ಸಮಸ್ಯೆ ಎದುರಾಗಿದೆ. ಇದರಿಂದ ಬ್ಯಾಂಕ್ ಗಳ ಸಾಲಮರುಪಾವತಿ ಮಾಡುವುದು ಕಷ್ಟವಾಗಿದೆ. ಆದಕಾರಣ ಇಂದು ಆರ್ ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ