ಬಂದೂಕಿನಲ್ಲಿ ನಂಬಿಕೆಯುಳ್ಳವರಿಗೆ ಬಂದೂಕಿನಿಂದಲೇ ಉತ್ತರ– ಯೋಗಿ ಆದಿತ್ಯನಾಥ್

ಶುಕ್ರವಾರ, 9 ಫೆಬ್ರವರಿ 2018 (16:23 IST)
ಬಂದೂಕು ಭಾಷೆಯಲ್ಲಿ ನಂಬಿಕೆ ಹೊಂದಿರುವವರಿಗೆ ಅದೇ ರೀತಿಯಲ್ಲಿ ಉತ್ತರ ನೀಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
 
ರಾಜ್ಯದಲ್ಲಿ ಎನ್‍ಕೌಂಟರ್ ಮತ್ತು ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಟೀಕೆಗಳ ನಡುವೆ ಮುಖ್ಯಮಂತ್ರಿ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ.
 
ರಾಜ್ಯದಲ್ಲಿನ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಸಮಾಜದಲ್ಲಿ ಶಾಂತಿ ಕದಡಲು ಬಯಸುವವರಿಗೆ ಹಾಗೂ ಬಂದೂಕಿನಲ್ಲಿ ನಂಬಿಕೆ ಹೊಂದಿರುವವರಿಗೆ ಬಂದೂಕು ಭಾಷೆಯಿಂದಲೇ ಉತ್ತರ ನೀಡಬೇಕಾಗುತ್ತದೆ. ಆಧಿಕಾರಿಗಳಿಗೆ ತಲೆ ಕೆಡಿಸಿಕೊಳ್ಳದಂತೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ