ಉತ್ತರ ಪ್ರದೇಶ ಸಿಎಂ ಯೋಗಿ ಸಹೋದರ ಗಡಿ ಕಾಯುವ ಯೋಧ!

ಬುಧವಾರ, 25 ಅಕ್ಟೋಬರ್ 2017 (11:13 IST)
ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕುಟುಂಬದವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅಣ್ಣ ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ತಮ್ಮ ಗಡಿ ಕಾಯುವ ಸಾಮಾನ್ಯ ಯೋಧ ಎಂದರೆ ನೀವು ನಂಬಲೇ ಬೇಕು.

 
ಸಿಎಂ ಯೋಗಿ ಕಿರಿಯ ಸಹೋದರ ಶೈಲೇಂದ್ರ ಮೋಹನ್ ಭಾರತ-ಚೀನಾ ಗಡಿಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮವೊಂದರ ಪ್ರಕಾರ ಶೈಲೇಂದ್ರ ಮನಾದಲ್ಲಿ ಭಾರತದ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ.

ರಾಜಕಾರಣಿಗಳ ಕುಟುಂಬದವರು ಅಧಿಕಾರದ ದುರುಪಯೋಗಪಡಿಸುವ ಸಾಕಷ್ಟು ವರದಿ ಬರುತ್ತಿರುವ ಸಂದರ್ಭದಲ್ಲಿ ಸಿಎಂ ಯೋಗಿ ಅಣ್ಣನ ಅಧಿಕಾರದ ಕಿಂಚಿತ್ತೂ ಲಾಭವೂ ಪಡೆಯದೇ ದೇಶ ಸೇವೆ ಸಲ್ಲಿಸುತ್ತಿರುವ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ