ಮದ್ಯ ಖರೀದಿಸಲು ಹಣ ನೀಡದ ತಾಯಿಗೆ ಮಗ ಮಾಡಿದ್ದೇನು?

ಭಾನುವಾರ, 25 ಅಕ್ಟೋಬರ್ 2020 (09:59 IST)
ತೆಲಂಗಾಣ : ಮದ್ಯ ಖರೀದಿಸಲು ಹಣ ನೀಡದ 65 ವರ್ಷದ ತಾಯಿಯನ್ನು ಮಗ ಕುಡಗೋಲಿನಿಂದ ಶಿರಚ್ಚೇದನ ಮಾಡಿ ಕೊಲೆ ಮಾಡಿದ ಭೀಕರ ಘಟನೆ ತೆಲಂಗಾಣದ ನಾಗಾರ್ಕರ್ನೂಲ್ ಜಿಲ್ಲೆಯ ಕೊಲ್ಲಾಪುರದಲ್ಲಿ ನಡೆದಿದೆ.

ಚಂದ್ರಮ್ಮ ಮೃತಪಟ್ಟ ತಾಯಿ,  ರಾಮುಡು ಕೊಲೆ ಮಾಡಿದ ಮಗ. ಚಂದ್ರಮ್ಮನಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಕಿರಿಯ ಮಗನಾದ ಆರೋಪಿ ಕುಟುಂಬವನ್ನು ಬಿಟ್ಟು ತಾಯಿಯ ಜೊತೆ ವಾಸವಾಗಿದ್ದ.

ರಾಮುಡು ಕುಡಿತದ ದಾಸನಾಗಿದ್ದು ಮದ್ಯ ಖರೀದಿಸಲು ತಾಯಿಯ ಬಳಿ ಹಣ ಕೇಳಿದ್ದಾನೆ. ತಾಯಿ ಹಣ ಕೊಡಲು ನಿರಾಕರಿಸಿದಾಗ ಕೋಪಗೊಂಡ ಆತ ಕುಡಗೋಲಿನಿಂದ ಶಿರಚ್ಚೇದನ ಮಾಡಿ ಪರಾರಿಯಾಗಿದ್ದಾನೆ.
ಹಿರಿಯ ಮಗ ತಾಯಿಯನ್ನು ನೋಡಲು ಬಂದಾಗ ತಾಯಿ ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ತಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ