`ಉತ್ತರಪ್ರದೇಶದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ'

ಶನಿವಾರ, 11 ಮಾರ್ಚ್ 2017 (19:06 IST)
ನೋಟ್ ಬ್ಯಾನ್ ನಿರ್ಧಾರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗುತ್ತದೆ ಎಂಬುದು ಪ್ರತಿಪಕ್ಷಗಳ ನಿರೀಕ್ಷೆಯಾಗಿತ್ತು. ಆದರೆ, ಜನ ನರೇಂದ್ರಮೋದಿ ನಿರ್ಧಾರವನ್ನ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಹೇಳಿದ್ದಾರೆ.
 


 ಅಮಿತ್ ಶಾ ಸುದ್ದಿಗೋಷ್ಠಿಯ ಹೈಲೈಟ್ಸ್
-      ಉತ್ತರಪ್ರದೇಶದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸುತ್ತೇವೆ
-      ಪಂಜಾಬ್ ಸೋಲನ್ನ ಸಮಾಲೋಚನೆ ನಡೆಸುತ್ತೇವೆ., ಸೋಲಿನ ಕುರಿತು
-      ದೇಶದ ಬಡವರ್ಗದ ಜನ ಬಿಜೆಪಿ ಜೊತೆಗಿದ್ದಾರೆ.
-      ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಶ್ರಮಿಸಿದವರನ್ನ ಸಿಎಂ ಆಗಿ ಆಯ್ಕೆ
-      ಉತ್ತರಪ್ರದೇಶದ ಮತದಾರರು ಹಿಂದೂ-ಮುಸ್ಲೀಂ ಭೇದವನ್ನ ಮೀರಿ ನಿಂತಿದ್ದಾರೆ
-      ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಸಣ್ಣ ರೈತರಿಗೆ ಅನುಕೂಲವಾಗುವ ಯೋಜನೆ
-      ಉತ್ತರಪ್ರದೇಶದ ಜನರ ತೀರ್ಪು ದೇಶಕ್ಕೆ ಹೊಸ ದಿಕ್ಸೂಚಿ
-      ಸ್ವಾತಂತ್ರ ನಂತರದಲ್ಲಿ ನರೇಂದ್ರಮೋದಿ ಅತ್ಯಂತ ಪ್ರಭಾವಶಾಲಿ ನಾಯಕ
-      ಬಿಜೆಪಿ ಗೆಲುವು ಜನರ ಮತ್ತು ನರೇಂದ್ರಮೋದಿಯ ನೀತಿಗಳ ಗೆಲುವು

ವೆಬ್ದುನಿಯಾವನ್ನು ಓದಿ