ಪುತ್ರ ರಾಹುಲ್ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು ಗೊತ್ತಾ?

ಬುಧವಾರ, 12 ಏಪ್ರಿಲ್ 2017 (09:49 IST)
ನವದೆಹಲಿ: ಕಾಂಗ್ರೆಸ್ ಪಕ್ಷ ಸೋಲಿನಿಂದ ಹೊರಬೇಕಾದರೆ, ಸಮಗ್ರ ಬದಲಾವಣೆಯಾಗಬೇಕು ಎಂಬ ಮಾತು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಕಟ್ಟುತ್ತಾರಾ ಎಂಬ ಪ್ರಶ್ನೆಗಳಿಗೆ ಸ್ವತಃ ಸೋನಿಯಾ ಗಾಂಧಿ ಉತ್ತರಿಸಿದ್ದಾರೆ.

 

‘ಯಾವಾಗ ಜನರಿಗೆ ಗೊತ್ತಾಗಬೇಕೋ ಆಗ ಎಲ್ಲದಕ್ಕೂ ಉತ್ತರ ಗೊತ್ತಾಗಲಿದೆ. ಈಗಲೇ ಅವಸರ ಮಾಡಬೇಡಿ’ ಎಂದಿದ್ದಾರೆ. ಸದ್ಯಕ್ಕೆ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಎಲ್ಲಾ ಸಂಸದರು ಮತ್ತು ನಾಯಕರೊಂದಿಗೆ ಔತಣಕೂಟ ನೀಡಿದ್ದಾರೆ.

 
ಈ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ. ಈ ಸಂಸತ್ತು ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂದು ಹೇಳಲಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ