ಖಾರದ ಪುಡಿ ಎರಚಿ ದುಷ್ಟರಿಂದ ಪತಿಯ ರಕ್ಷಿಸಿದ ಪತ್ನಿ

ಶನಿವಾರ, 22 ಜನವರಿ 2022 (10:39 IST)
ಹೈದರಾಬಾದ್: ಕೊಲ್ಲಲು ಬಂದವರಿಗೆ ಖಾರದ ಪುಡಿ ಎರಚಿ ಪತ್ನಿ ಪತಿಯನ್ನು ಕಾಪಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಲಾರಿ ಅಸೋಸಿಯೇಷನ್ ಅಧ್ಯಕ್ಷರಾಗಿರುವ ವೇಮುಲ ಭೂಪಾಲ್ ಎಂಬವರನ್ನು ಕೊಲ್ಲಲು ಮಧ್ಯರಾತ್ರಿ ಮನೆಗೆ ನಾಲ್ವರು ದುಷ್ಕರ್ಮಿಗಳು ಬಂದಿದ್ದರು. ಮೂವರು ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದರು.

ಈ ವೇಳೆ ಎಚ್ಚೆತ್ತುಕೊಂಡ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಹೋಗಿ ಖಾರದ ಪುಡಿ ತಂದು ದುಷ್ಕರ್ಮಿಗಳಿಗೆ ಎರಚಿದ್ದಾಳೆ. ಬಳಿಕ ನೆರೆಹೊರೆಯವರನ್ನು ಕೂಗಿ ಕರೆದಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿಗಳು ಆಟೋದಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.  ಆದರೆ ಆರೋಪಿಗಳಲ್ಲಿ ಒಬ್ಬ ಸಿಕ್ಕಿಬಿದ್ದಿದ್ದು ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ