ಪ್ರಿಯಕರನ ತೋಟದಲ್ಲಿ ಪ್ರಾಣ ಬಿಟ್ಟ ಪ್ರೇಯಸಿ

ಶನಿವಾರ, 7 ಮೇ 2022 (07:10 IST)
ಹೈದರಾಬಾದ್: ಮದುವೆ ವಿಚಾರ ಮಾತನಾಡಲು ಪ್ರಿಯಕರನ ತೋಟಕ್ಕೆ ಹೋಗಿದ್ದ ಕಾಲೇಜು ವಿದ್ಯಾರ್ಥಿನಿ ಹೆಣವಾಗಿ ಪತ್ತೆಯಾಗಿದ್ದಾಳೆ. ಕುಟುಂಬಸ್ಥರು ಗ್ಯಾಂಗ್ ರೇಪ್ ಮತ್ತು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ತೇಜಸ್ವಿನಿ ಎಂಬಾಕೆ ಸಾದಿಕ್ ಎಂಬಾತನ ಜೊತೆ ಮೂರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಇದೀಗ ಮದುವೆಯಾಗುವ ವಿಚಾರ ಮಾತನಾಡಲು ಇಬ್ಬರೂ ಸಾದಿಕ್ ನ ತೋಟದಲ್ಲಿ ಭೇಟಿಯಾಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಇಬ್ಬರೂ ಮಾತುಕತೆ ನಡೆಸಿದ್ದಾರೆ.

ಬಳಿಕ ಸಾದಿಕ್ ತನ್ನ ಮನೆಗೆ ತೆರಳಿದ್ದಾನೆ. ವಾಪಸ್ ಬಂದು ನೋಡಿದಾಗ ತೇಜಸ್ವಿನಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಸಾದಿಕ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ