ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು ಎಂದ ಯೋಗಿ ಆದಿತ್ಯನಾಥ್
ರಾಜಸ್ಥಾನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೇಶದಲ್ಲಿ ಉಗ್ರರ ಉಪಟಳ ತಾರಕಕ್ಕೇರಿತ್ತು ಎಂದೂ ಅವರು ಆರೋಪಿಸಿದ್ದಾರೆ.
ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಬಿರಿಯಾನಿ ಬೇಕೆಂದು ಕೇಳಿದ್ದ ಎಂದು ಈ ಹಿಂದೆ ನ್ಯಾಯವಾದಿ ಉಜ್ವಲ್ ನಿಕಂ ಹೇಳಿದ್ದರು. ಅದೇ ಹೇಳಿಕೆ ಉಲ್ಲೇಖಿಸಿ ಯೋಗಿ ಈ ರೀತಿ ಟೀಕಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಟೀಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಿಕಂ ಆವತ್ತು ನಾನು ಪ್ರಕರಣದ ವಿಚಾರಣೆಗಾಗಿ ಹಾಗೊಂದು ಹೇಳಿಕೆ ನೀಡಿದ್ದೆನಷ್ಟೇ ಎಂದಿದ್ದಾರೆ.