ಕೈಗೆ ಕಚ್ಚಿದ್ದ ಎದುರಾಳಿ ಮರುದಿನ ನನಗಾಗಿ ಕಾಯುತ್ತಿದ್ದ!: ರವಿಕುಮಾರ್ ದಹಿಯಾ

ಮಂಗಳವಾರ, 10 ಆಗಸ್ಟ್ 2021 (08:45 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾಗೆ ಎದುರಾಳಿ ಕಚ್ಚಿ ಗಾಯಗೊಳಿಸಿದ್ದು ಭಾರೀ ಸುದ್ದಿಯಾಗಿತ್ತು.


ಇದರ ಬಗ್ಗೆ ಇದೀಗ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ಕಚ್ಚಿದ್ದ ಕಝಕಿಸ್ತಾನ್ ನ ಎದುರಾಳಿ ಬಳಿಕ ಕ್ಷಮೆ ಕೇಳಿದ್ದ ಎಂದು ರವಿಕುಮಾರ್ ಹೇಳಿದ್ದಾರೆ.

ಘಟನೆ ನಡೆದ ಮರುದಿನ ಸನಯೇವ್ ನನಗಾಗಿ ಕಾದು ಕುಳಿತಿದ್ದರು. ನನ್ನ ಕಂಡಕೂಡಲೇ ಕೈಕುಲುಕಿ ನನ್ನ ‘ಸಾರಿ ಬ್ರದರ್’ ಎಂದು ಕೇಳಿದರು. ನಾನು ಆಗಲೇ ಆ ವಿಚಾರವನ್ನು ಮರೆತಿದ್ದೆ. ಅದಾದ ಬಳಿಕ ನಾವು ಉತ್ತಮ ಸ್ನೇಹಿತರಾದೆವು’ ಎಂದು ರವಿಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ