ಒಂದು ರೂಪಾಯಿ ವರದಕ್ಷಿಣೆ ರಹಸ್ಯ ಬಿಚ್ಚಟ್ಟ ಕುಸ್ತಿ ಪಟು ಯೋಗೇಶ್ವರ್ ದತ್

ಸೋಮವಾರ, 16 ಜನವರಿ 2017 (12:26 IST)
ನವದೆಹಲಿ: ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿರುವ ಭಾರತದ ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಕೇವಲ ಒಂದು ರೂಪಾಯಿ ವರದಕ್ಷಿಣೆ ಪಡೆದು ಮಾದರಿಯಾಗಿದ್ದಾಗಿ ನಿನ್ನೆ ಸುದ್ದಿಯಾಗಿತ್ತು. ಆದರೆ ಈ ಒಂದು ರೂಪಾಯಿ ಹಿಂದಿನ ರಹಸ್ಯವೇನೆಂದು ಸ್ವತಃ ಯೋಗೇಶ್ವರ್ ದತ್ ಬಿಚ್ಚಿಟ್ಟಿದ್ದಾರೆ.

ನಿಜವಾಗಿ ತಾನು ಒಂದು ರೂಪಾಯಿ ಪಡೆದಿದ್ದು, ವರದಕ್ಷಿಣೆ ಎಂದಲ್ಲ, ಅದು ಶಗುನ್ ರೂಪದಲ್ಲಿ ಪಡೆದಿದ್ದೆನಷ್ಟೆ. ಹರ್ಯಾಣಾದ ಕಾಂಗ್ರೆಸ್ ನಾಯಕನ ಪುತ್ರಿ ಶೀತಲ್ ಜತೆ ವಿವಾಹವಾಗಲಿರುವ ಯೋಗೇಶ್ವರ್ ಒಂದು ರೂಪಾಯಿ ವರದಕ್ಷಿಣೆ ಪಡೆದು ಆದರ್ಶ ಮೆರೆದಿದ್ದರು ಎಂದು ಸುದ್ದಿಯಾಗಿತ್ತು. ಹಾಗಿದ್ದರೆ ದತ್ ವರದಕ್ಷಿಣೆ ರೂಪದಲ್ಲಿ ಹಣ ಪಡೆದರೇ?

ಖಂಡಿತಾ ಇಲ್ಲ. ಒಂದು ರೂಪಾಯಿ ಕೂಡಾ ವರದಕ್ಷಿಣೆ ಪಡೆಯದೇ ವಿವಾಹವಾಗುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥದ ದಿನ ಒಂದು ರೂಪಾಯಿ ಪಡೆದಿದ್ದರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ