ಮಳೆಗೆ ಕೊಚ್ಚಿಹೋದ ಭಾರತ ಕೆನಡಾ ಪಂದ್ಯ: ರೋಹಿತ್‌ ಬಳಗಕ್ಕೆ ಅಗ್ರಸ್ಥಾನ

Sampriya

ಭಾನುವಾರ, 16 ಜೂನ್ 2024 (10:41 IST)
Photo Courtesy X
ಅಮೆರಿಕ: ಶನಿವಾರ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಕೆನಡಾ ಪಂದ್ಯವು ಮಳೆಯ ಆಟಕ್ಕೆ ಕೊಚ್ಚಿಹೋಯಿತು.

ಮಳೆಯಿಂದಾಗಿ ಎ ಗುಂಪಿನ ಭಾರತ ಮತ್ತು ಕೆನಡಾ ನಡುವಣ ಪಂದ್ಯವು ರದ್ದಾಯಿತು.  ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು. ಇದರೊಂದಿಗೆ ಕೆನಡಾ ತಂಡವು ಒಟ್ಟು 3 ಅಂಕ ಗಳಿಸಿ, ಟೂರ್ನಿಯಿಂದ ಹೊರಬಿತ್ತು.

ಭಾರತ ತಂಡವು ಗುಂಪಿನಲ್ಲಿ ಈಗಾಗಲೇ ಅಗ್ರಸ್ಥಾನ ಪಡೆದು ಸೂಪರ್ 8ರ ಹಂತ ಪ್ರವೇಶಿಸಿದೆ. ಎರಡನೇ ಸ್ಥಾನದಲ್ಲಿರುವ ಅಮೆರಿಕವೂ ಎಂಟರ ಹಂತಕ್ಕೆ ಅರ್ಹತೆ ಗಳಿಸಿದೆ. ಶುಕ್ರವಾರ ಅಮೆರಿಕ ಮತ್ತು ಐರ್ಲೆಂಡ್ ನಡುವಣ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು.  

ರಾತ್ರಿ 8 ಗಂಟೆಗೆ ಪಂದ್ಯ ಆರಂಭ ವಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಮಳೆ ಸುರಿಯಲಾರಂಭಿಸಿದ ಕಾರಣ ಟಾಸ್ ಹಾಕಲಿಲ್ಲ. ನಂತರ ಅಂಪೈರ್‌ಗಳು ಎರಡು ಬಾರಿ ಮೈದಾನವನ್ನು ಪರಿಶೀಲಿಸಿ, ಪಂದ್ಯವನ್ನು ರದ್ದುಗೊಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ