ಬಿಗ್ ಬಾಸ್ ಕನ್ನಡ: ಅಪರೂಪಕ್ಕೆ ತಾಳ್ಮೆ ಕಳೆದುಕೊಂಡ ಜೆಕೆ!

ಶುಕ್ರವಾರ, 22 ಡಿಸೆಂಬರ್ 2017 (10:44 IST)
ಬೆಂಗಳೂರು: ಇಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಎಷ್ಟೇ ಕಿಚ್ಚು ಹತ್ತಿ ಉರಿಯುತ್ತಿದ್ದರೂ ನಗು ನಗುತ್ತಲೇ ಇದ್ದ ಜಯರಾಮ್ ಕಾರ್ತಿಕ್ ನಿನ್ನೆ ಕೊಂಚ ತಾಳ್ಮೆ ಕಳೆದುಕೊಂಡು ಮಾತನಾಡಿದರು.
 

ಲಕ್ಷುರಿ ಬಜೆಟ್ ಟಾಸ್ಕ್ ಗೆ ಸಂಬಂಧಿಸಿದಂತೆ ಮನೆಯಲ್ಲಿ ಮಹಿಳೆಯರು ಮತ್ತು ಪುರುಷರು ಎಂದು ಎರಡು ಗುಂಪುಗಳಾಗಿವೆ. ಬೆಳ್ಳಂ ಬೆಳಿಗ್ಗೆನೇ ಪುರುಷರ ತಂಡದ ನಾಯಕ ಜಯಶ್ರೀನಿವಾಸನ್ ಎಲ್ಲರನ್ನೂ ಕರೆಸಿ ಮೀಟಿಂಗ್ ಮಾಡುತ್ತಿದ್ದರು.

ಆದರೆ ಈ ಸಂದರ್ಭದಲ್ಲಿ ರಿಯಾಜ್ ನಾನು ಏನೋ ಹೇಳಬೇಕು ಎಂದು ಎಲ್ಲರನ್ನೂ ಕರೆದಾಗ ಜೆಕೆ ಸಿಟ್ಟಿಗೆದ್ದರು. ನಾಯಕ ಎನಿಸಿಕೊಂಡವರು ಮಾತಾಡಲಿ. ಎಲ್ಲರೂ ನಾನು ಮಾತಾಡಬೇಕು ಎಂದು ರೂಲ್ಸ್ ಬಗ್ಗೆ ಮಾತನಾಡುತ್ತಿದ್ದರೆ ನನ್ನಿಂದಾಗಲ್ಲ. ನಾನೂ ಹೇಳ್ತೀನಿ, ನಾಳೆ ಇನ್ನೊಬ್ಬರು ಹೇಳ್ತಾರೆ. ಎಲ್ಲರೂ ಹೇಳೋದನ್ನು ಕೇಳಕ್ಕಾಗುತ್ತಾ? ಕ್ಯಾಪ್ಟನ್ ಮಾತು ಮಾತ್ರ ನಾವು ಕೇಳೋದು ಎಂದು ಜೆಕೆ ಖಡಕ್ ಆಗಿ ಮಾತಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ