ಗಟ್ಟಿಮೇಳ ಅಂತ್ಯ: ಅಂತಿಮ ಸಂಚಿಕೆಯಲ್ಲಿರಲಿದೆ ಸರ್ಪೈಸ್

ಶುಕ್ರವಾರ, 29 ಡಿಸೆಂಬರ್ 2023 (09:20 IST)
WD
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಗಟ್ಟಿಮೇಳ ಅಂತ್ಯವಾಗುತ್ತಿದ್ದು, ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿದೆ.

ಇದೀಗ ಧಾರವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ವಸಿಷ್ಠ ಕುಟುಂಬದ ಹಿರಿಯ ಸೂರ್ಯನಾರಾಯಣ ವಸಿಷ್ಠರನ್ನು ಈಗ ವಿಲನ್ ಅಗ್ನಿ ಮತ್ತು ಆತನ ತಂದೆ ಕಿಡ್ನ್ಯಾಪ್ ಮಾಡಿದ್ದು, ಸೂರ್ಯನಾರಾಯಣ ವಸಿಷ್ಠರನ್ನು ಬಿಡಿಸಿಕೊಳ್ಳುವುದು ಮತ್ತು ವಸಿಷ್ಠ ಕುಟುಂಬ ಒಂದಾಗುವುದೇ ಕ್ಲೈಮ್ಯಾಕ್ಸ್ ಆಗಿರಲಿದೆ.

ಈಗಾಗಲೇ ಅಂತಿಮ ಸಂಚಿಕೆಯ ಶೂಟಿಂಗ್ ನಡೆದಿದೆ. ವಿಶೇಷವೆಂದರೆ ಕಳೆದ ಕೆಲವು ಸಮಯದಿಂದ ಈ ಧಾರವಾಹಿ ನಾಯಕನಿಲ್ಲದೇ ನಡೆಯುತ್ತಿತ್ತು. ನಾಯಕ ವೇದಾಂತ್ ವಸಿಷ್ಠ ಪಾತ್ರ ಮಾಡುತ್ತಿದ್ದ ನಟ ರಕ್ಷ್ ಸಿನಿಮಾ ಕಮಿಟ್ ಮೆಂಟ್ ಗಳಿಂದಾಗಿ ಧಾರವಾಹಿಯಿಂದ ದೂರವಾಗಿದ್ದರು.

ಇದು ಅಭಿಮಾನಿಗಳಿಗೂ ಬೇಸರವಾಗಿತ್ತು. ನಾಯಕ ವೇದಾಂತ್ ವಾಪಸ್ ಕರೆಸಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಳ್ಳುತ್ತಲೇ ಇದ್ದರು. ಇದೀಗ ವೀಕ್ಷಕರಿಗೆ ಸರ್ಪೈಸ್ ನೀಡಲು ಅಂತಿಮ ಸಂಚಿಕೆಗೆ ವೇದಾಂತ್ ಆಗಮನವಾಗಿದೆ. ಕೇವಲ ವೇದಾಂತ್ ಮಾತ್ರವಲ್ಲ, ವಿಕ್ರಾಂತ್ ವಸಿಷ್ಠ ಕೂಡಾ ಪುನರಾಗಮನ ಮಾಡಿದ್ದಾರೆ. ಹೀಗಾಗಿ ಅಂತಿಮ ಸಂಚಿಕೆ ವೀಕ್ಷಕರಿಗೆ ನಿಜಕ್ಕೂ ಸರ್ಪೈಸಿಂಗ್ ಆಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ