ಕನ್ನಡ ಕಿರುತೆರೆ ನಟಿ ರಚನಾ ದುರ್ಮರಣ

ಗುರುವಾರ, 24 ಆಗಸ್ಟ್ 2017 (07:21 IST)
ಬೆಂಗಳೂರು: ಮಹಾನದಿ, ಮಧುಬಾಲಾ ಸೇರಿದಂತೆ ಜನಪ್ರಿಯ ಧಾರವಾಹಿಗಳ ನಾಯಕಿ ನಟಿಯಾಗಿ ಅಭಿನಯಿಸಿದ್ದ ಕನ್ನಡ ಕಿರುತೆರೆ ನಟಿ ರಚನಾ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

 
ನಿನ್ನೆ ತಡರಾತ್ರಿ ನೆಲಮಂಗಲ ತಾಲೂಕು ಸೋಲೂರು ಬಳಿ ಈ ಅಪಘಾತ ನಡೆದಿದೆ. ರಚನಾ ಜತೆ ಸಹ ನಟ ಜೀವನ್ ಕೂಡಾ ಮೃತಪಟ್ಟಿದ್ದಾರೆ. ಸ್ನೇಹಿತರು, ಸಹ ನಟರ ಜತೆ ರಚನಾ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ತೆರಳುತ್ತಿದ್ದರು. ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆ ಈ ಪ್ರವಾಸ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ನಿಂತಿದ್ದ ಟ್ಯಾಂಕರ್ ಗೆ ನಟಿ ಪ್ರಯಾಣಿಸುತ್ತಿದ್ದ ಸಫಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಚನಾ ಹಾಗೂ ನಟ ಜೀವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ