ನಟ, ನಿರೂಪಕ ಮಾಸ್ಟರ್ ಆನಂದ್ ಗೆ ವಂಚನೆ: ದೂರು ನೀಡಿದ ನಟ

ಸೋಮವಾರ, 26 ಜೂನ್ 2023 (10:45 IST)
ಬೆಂಗಳೂರು: ನಟ, ನಿರೂಪಕ ಮಾಸ್ಟರ್ ಆನಂದ್ ಗೆ ನಿವೇಶನ ಖರೀದಿ ವಿಚಾರದಲ್ಲಿ ಭಾರೀ ಮೊತ್ತದ ಹಣಕಾಸಿನ ವಂಚನೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಆನಂದ್ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2020-21 ರ ಅವಧಿಯಲ್ಲಿ ವಂಚನೆ ನಡೆದಿದೆ.ಮಲ್ಟಿ ಲೀಪ್ ವೆಂಚರ್ಸ್ ಎಂಬ ಸಂಸ್ಥೆ ಆನಂದ್ ಗೆ ಸುಮಾರು 18 ಲಕ್ಷ ರೂ. ವಂಚನೆ ಮಾಡಿದೆ ಎನ್ನಲಾಗಿದೆ.

200 ಅಡಿ ವಿಸ್ತೀರ್ಣದ ಜಾಗವನ್ನು ಆನಂದ್ ಮತ್ತು ಯಶಸ್ವಿನಿ ಖರೀದಿ ಮಾಡಲು ಒಪ್ಪಿ ಮುಂಗಡ ಹಣದ ರೂಪದಲ್ಲಿ 18.5 ಲಕ್ಷ ರೂ. ಪಾವತಿಸಿದ್ದರು. ಆದರೆ ಬಳಿಕ ಸಂಸ್ಥೆ ಈ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದೆ. ಹೀಗಾಗಿ ತಮಗೆ ವಂಚನೆ ಮಾಡಿದ ಕಂಪನಿ ವಿರುದ್ಧ ಆನಂದ್ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ