ಟ್ರೋಲ್ ನಲ್ಲಿ ಟ್ರೆಂಡಿಗ್ ಏನು… ಕನ್ನಡಿಗರಿಗೆ ಸಂತಸವಾಗಿದ್ದೇಕೆ..?

ಸೋಮವಾರ, 6 ನವೆಂಬರ್ 2017 (22:42 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅರಚಾಡಿ ಕಿರುಚಾಡಿದ್ರು ಮೂರನೇ ವಾರವೇ ದಯಾಳ್ ಪದ್ಮನಾಭನ್ ಮನೆಯಿಂದ ಔಟ್ ಆಗಿದ್ದಾರೆ.

ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ ಕನ್ನಡದ ಎಲ್ಲಾ ಟ್ರೋಲ್ ಪೇಜ್ ಗಳಲ್ಲಿ ಸದ್ಯ ಹೆಚ್ಚು ಟ್ರೋಲ್ ಆಗುತ್ತಿರೋದು ದಯಾಳ್. ಬಿಗ್ ಬಾಸ್ ಗೆ ದಯಾಳ್ ಬಂದಾಗಿನಿಂದಲೂ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ. ಕಳೆದ ವಾರ ಸಮೀರ್ ಆಚಾರ್ಯಗೆ ಹಾಲು ನೀಡುವ ವಿಷಯ ಬಂದಾಗ ಹಾಲು ಉಳಿತಾಯ ಮಾಡಲು ತೆಗೆದಿಟ್ಟಿದ್ದೇವೆ ಎಂದು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡ್ತಿದೆ.

ದಯಾಳ್ ಎಲಿಮಿನೇಟ್ ಆದಮೇಲಂತೂ ಟ್ರೋಲ್ ಪೇಜ್ ಗಳಲ್ಲಿಯೂ ದಯಾಳ್ ರದ್ದೇ ಸುದ್ದಿಯ ಸದ್ದು. ಕನ್ನಡಿಗರಿಗಂತು ದಯಾಳ್ ಔಟ್ ಆಗಿದ್ದು ಸಖತ್ ಖುಷಿಯಾಗಿದೆ. ಟ್ರೋಲ್ ಅಣ್ತಾಮ್ಮಾಸ್ ಪೇಜ್ ಸೇರಿದಂತೆ ಹಲವು ಪೇಜ್ ಅಡ್ಮಿನ್ ಗಳಿಗೆ ಹಬ್ಬವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ