ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಪ್ರಕಾರ ಭಯೋತ್ಪಾದನೆಗಿಂತ ಮಹಾಪರಾಧ ಯಾವುದು ಗೊತ್ತಾ?

ಬುಧವಾರ, 1 ಆಗಸ್ಟ್ 2018 (12:33 IST)
ಜೈಪುರ : ಇತ್ತೀಚೆಗೆ ಗೋಹತ್ಯೆದ ಬಗ್ಗೆ ದೇಶದಾದ್ಯಂತ ಬಾರೀ ಚರ್ಚೆಗಳು ನಡೆಯುತ್ತಿದ್ದು, ಅನೇಕ ರಾಜಕೀಯ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರಾಜಸ್ಥಾನ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಈ ಬಗ್ಗೆ ಮಾತನಾಡಿ 'ಗೋಹತ್ಯೆ ಮಾಡುವುದು ಭಯೋತ್ಪಾದನೆಗಿಂತ ದೊಡ್ಡ ಅಪರಾಧ' ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜಸ್ಥಾನದ ಅಲ್ವಾರ್ ನಲ್ಲಿ ರಕ್ಬರ್ ಖಾನ್ ಎಂಬ ಯುವಕನನ್ನು ಗೋಕಳ್ಳನೆಂದು ದೂರಿ ಜನರ ಗುಂಪೊಂದು ಹೊಡೆದು ಸಾಯಿಸಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿಯಾಗಿ ಹೇಳಿದ್ದಾರೆ.

 

’ ಭಯೋತ್ಪಾದನೆಗಿಂತ ಗೋ ಹತ್ಯೆ ಮಹಾಪರಾಧ. ಏಕೆಂದರೆ ಭಯೋತ್ಪಾದಕರು ಎರಡು ಮೂರು ಜನರನ್ನು ಕೊಲ್ಲಬಹುದು. ಆದರೆ ಗೋವನ್ನು ಸಾಯಿಸುವುದರಿಂದ ಕೋಟ್ಯಂತರ ಹಿಂದುಗಳ ಮನಸ್ಸಿಗೆ ನೋವಾಗುತ್ತದೆ' ಎಂದು ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ