ಅಮರನಾಥ ಯಾತ್ರೆ ಸ್ಥಗಿತ!

ಭಾನುವಾರ, 17 ಜುಲೈ 2022 (11:46 IST)
ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ಅಧಿಕ ಮಳೆ ಆಗುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಗುರುವಾರ 2 ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
 
ಅಮರನಾಥ ಯಾತ್ರೆಗೆ ತೆರಳುವ ಪಹಲ್ಗಾಮ್ ಹಾಗೂ ಬಾಲ್ವಾಲ್ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಯಾವುದೇ ಯಾತ್ರಿಕರನ್ನು ಪವಿತ್ರ ಗುಹೆಯೊಳಗೆ ತೆರಳಲು ಅನುಮತಿ ನೀಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಹವಮಾನ ಸುಧಾರಿಸಿದ ನಂತರ ಅಮರನಾಥ ಯಾತ್ರೆ ಪುನಾರಂಭವಾಗಲಿದೆ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ